Monday, January 26, 2009

ಕನವರಿಕೆ.....


ಸನ್ನೆ ಮಾಡುತಿಹಳು ಕಣ್ಣ ನೋಟದಲ್ಲಿ
ನನ್ನೆ ಕೆಣಕುತಿಹಳು ಕಣ್ಣಂಚಿನ ಕುಡಿಯಲ್ಲಿ
ಕನ್ನ ಹಾಕುತಿಹಳು ನನ್ನೆದೆಯ ಕನಸಿನಲ್ಲಿ….

ಇದು ಯಾವ ಕಲೆಗಾರ ಕಲಿಸಿ ಕೊಟ್ಟ ಕಲೆಯೊ
ತಿಳಿಯದು ಕೊಲ್ಲು ತಿಹಳು ನೋಟದ ಸೆಳತದಲ್ಲಿ
ಕನಸುಗಳು ಕೊಚ್ಚಿ ಹೋಗುವ ಸೂಚನೆ ಸಿಕ್ಕೆದೆ ಎನಗೆ...

ಅಗುರ ಹೃದಯದಲ್ಲಿ ಬಾರವ ಹೊತ್ತು
ನೆಡೆಯುತ್ತಿದೆ ಪ್ರೀತಿಯ ತೇರು
ಹೊರಲಾಗೆದೆ ಬಾರವ ಹೃದಯವು ಬೀಳುವುದೆಂದೊ ನೆನೆಗುದಿಗೆ…..

ಕಾಣದ ಕನವರಿಕೆ ಕನಸುಗಳ ಸರಮಾಲೆ
ಸಿಕ್ಕರು ಏಣಿಸಲಾಗದ ಮಧುರಮಾಲೆ
ಬೇಕೆದೆ ಏನಗೊಂದು ಪ್ರೀತಿಯ ಮಾಲೆ….

ಬೆಂಕಿಯಿಲ್ಲದೆ ಆಗುತಿರುವೆ ಇಂದು ಸಜೀವ ದಹನ
ನನ್ನ ಪ್ರೇಯಸಿಗಿಲ್ಲವೆ ಇದರ ಕಂಪನ
ಬೇಕೆದೆ ಏನಗೆ ಇಂದು ಬೆಂಕಿಯ ನಂದಿಸಲು ಪ್ರೀತಿಯ ಸಿಂಚನ…

Tuesday, January 6, 2009

ಮುಸ್ಸಂಜೆಯ ಪಾಠ......


ನಾನು ಆಗ ತಾನೆ ಹತ್ತನೆ ತರಗತಿ ಮುಗಿಸಿ ಕಾಲೇಜಿಗೆ ಸೇರಬೇಕೆಂದು ಹತ್ತಾರು ನನ್ನದೆ ಕನಸುಗಳನು ಕಟ್ಟಿಕೊಂಡು ಕಾಲೇಜ್ ಅಂದರೆ ಸಾಕು ಹಾಗಿರುತ್ತದೆ ಹಿಗಿರುತ್ತದೆ ಎಂದು ಕನಸು ಕಾಣುತ್ತಿದೆ.ಆದರೆ ಕೊನೆಗೆ ನನ್ನ ಲೆಕ್ಕಚಾರವೆಲ್ಲ ತಲೆಕೆಳಗಾಗಿ ಹೋಯಿತು, ಏಕೆಂದರೆ ನಾನು ಹೋಗಿ ಸೆರಿದ್ದು ಸಂಜೆ ಕಾಲೇಜಿಗೆ, ಅಲ್ಲಿಯವೆರೆಗೂ ನನಗೆ ಈ ತರಹ ಕಾಲೇಜುಗಳು ಇರುವ ಬಗ್ಗೆ ತಿಳಿದಿರಲ್ಲಿಲ್ಲ. ಅಲ್ಲಿ ಇಲ್ಲಿ ಪೇಪರ್ ನಲ್ಲಿ ಓದಿದ್ದೆ , ಏನಾದರು ಅಷ್ಟೋಂದು ಮಾಹಿತಿ ನನಗೆ ಇರಲಿಲ್ಲ. ನಾನು ನನ್ನ ಸ್ನೆಹಿತರಿಗೆಲ್ಲ ಈ ತರಹದ ಕಾಲೇಜಿಗೆ ಸೇರಿದ್ದೆನೆ ಎಂದು ಹೇಳುವುದ್ದಕ್ಕೆ ಮೂದಮೂದಲು ಮುಜುಗರವಾಗುತ್ತಿತ್ತು. ಕೊನೆದೆ ಸೇರುವ ಎಲ್ಲಾ ಶುಲ್ಕವನ್ನು ಕಟ್ಟಿದೆನು ನಂತರ, ಕಾಲೇಜಿಗೆ ಹೋಗುವ ದಿನ ಬಂದೆ ಬಿಟ್ಟಿತು. ಬೆಳ್ಳಗಿನಿಂದಲೆ ಕಾಲೇಜಿಗೆ ಹೊರಡುವ ತಯಾರಿ ನಡೆಸಿದೆನು ಆದ ನನ್ನ ಕೆಲವು ಸ್ನೆಹಿತರೆಲ್ಲ ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ಸ್ಟಾಂಡಿನಲ್ಲಿ ಬಸ್ ಇಳಿದು ಮನೆಗೆ ತೆರಳುವಾಗ ನಾನು ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಎಲ್ಲರು ಮನೆ ಬಂದು ವಿಶ್ರಮಿಸಿಕೊಳ್ಳುತ್ತಿದ್ದಾಗ, ಮನೆಯಲ್ಲಿ ಕುಳಿತು ಟಿ.ವಿ ಯಲ್ಲಿ ಬರುವ ಸೀರಿಯಲ್ಲು ನೋಡುತ್ತಿದ್ದಾಗ, ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲರು ಉಂಡು ಮಲಗಿರುವಾಗ ಮನೆಗೆ ಬರುತ್ತಿದ್ದೆ. ಆದರೆ ನಾನು ಕಾಲೇಜ್ ಹೊಗುವುದು ಪ್ರಯಶಃ ಯಾರಿಗು ತಿಳಿದಿರಲಿಲ್ಲ ಸೂರ್ಯ ಮುಳುಗಿದ ಮೇಲೆ ಟಾರ್ಚ್ ಹಾಕಿಕೊಂಡು ಕಾಲೇಜ್ ಗೆ ಹೋಗುತ್ತಿದ್ದೆ.

ಇದು ಮೂದಲು ತುಂಬ ಬೆಸರ ತಂದಿತ್ತು ಆಗ ತಾನೆ ಶಾಲೆ ಮುಗಿಸಿದ್ದ ನನಗೆ ಇದೆಲ ತುಂಬ ಹೊಸತು ಅಲ್ಲದೆ ನಾವು ಶಾಲ ದಿನಗಳಲ್ಲಿ ಸಂಜೆಯವರೆಗೂ ಆಟ ಆಡುತ್ತಿದ್ದ ನನಗೆ ತುಂಬ ಬೆಸರವೆ ಆಯಿತು.ಸರಿ ಅಂತ ಬಸ್ ಹಿಡಿದು ಕಾಲೇಜಿನ ಬಳಿಗೆ ಹೋದೆ ಅಂದು ಮೂದಲ ದಿನವಾದ್ದರಿಂದ ಸ್ವಲ್ಪ ಬೇಗನೆ ಹೋದೆ.ನಂತರ ನನ್ನ ತರಹವೆ ಒಬ್ಬ ಗೆಳೆಯ ಪರಿಚಯವಾದ ಹಾಗೆ ಇಬ್ಬರು ಮಾತಾಡಿಕೊಂಡು ನಂತರ ಕ್ಲಾಸ್ ರೊಂ ಹುಡುಕುತ್ತ ಹೊರಟೆವು, ಕಾಲೇಜಿನ ಸಮಯವಿದ್ದದ್ದು ಸಂಜೆ ೬.೦೦ ಘಂಟೆಗೆಯಿಂದ ೯.೦೦ ಘಂಟೆಯವರೆಗು.ಅಂದು ಬೇಗ ಹೊದ್ದರಿಂದ ತರಗತಿಗಳು ಇನ್ನೂ ಶುರುವಾಗಿರಲಿಲ್ಲ, ಹಾಗೆ ಸ್ನೇಹಿತರ ಪರಿಚಯವಾಯಿತು ಆದರೆ ಅಲ್ಲಿ ಇದ್ದವರೆಲ್ಲ ಹೆಚ್ಚು ಕಮ್ಮಿ ನನ್ನ ವಯಸ್ಸಿಗಿಂತ ದೊಡ್ದವರು ಅಂದರೆ ಕೆಲಸ ಮುಗಿಸಿ ಓದುವ ಅಂಬಲದಿಂದ ಕಾಲೇಜಿಗೆ ಬರುವವರೇ ಹೆಚ್ಚು, ಅಥಾವ ಬೆಳ್ಳಗೆ ಬೇರೆ ಕೆಲಸ ಮಾಡಿ ನಂತರ ಕಾಲೇಜಿಗೆ ಬರುವವರು ಇದಲ್ಲವನ್ನು ಕೇಳಿ ನನಗೆ ಈ ತರಹದ ಪ್ರಪಂಚವು ಇದೆಯಾ ಎಂದು ನನ್ನನೆ ನಾನು ಒಮ್ಮೆ ಪ್ರಶ್ನೆ ಮಾಡಿಕೊಂಡೆ....? ನಂತರ ಕ್ಲಾಸ್ ಶುರುವಾಯಿತು.ಒಬ್ಬ ಪ್ರಾದ್ಯಾಪಕ ಬಂದು ಕ್ಲಾಸ್ ತೆಗೆದು ಕೊಂಡ,
ಆತ ನಮ್ಮಗೆ ಇಂಗ್ಲಿಷ್ ಪ್ರಾದ್ಯಾಪಕನೆಂದು ತಿಳಿಸಿದ ಅತಿಯಾಗಿ ಆಟ ಆಡಿದರೆ ಬಾಲವನ್ನು ಕತ್ತರಿಸುವುದಾಗಿ ಎಚ್ಚರಿಕೆ ನೀಡಿದ. ಹಾಗೆಯೇ ತಾನು ಮೂದಲು ಈ ಕಾಲೇಜಿನಲ್ಲಿ ಆಟ ಹಾಡಲು ಬಂದ ಹುಡುಗರನ್ನು ಕಾಲೇಜಿನಿಂದಲೆ ತೆಗೆದಿರುವುದಾಗಿ ತಿಳಿಸಿದ ಅದನ್ನು ಕೇಳಿ ನನಗೆ ಸ್ವಲ್ಪ ಮರುಕವಾಯಿತು.ಅವನ ಪಾಡಿಗೆ ಅವನ್ನು ತನ್ನ ಕಥೆಯನ್ನು ಹೇಳುತ್ತಿದ್ದರೆ ನಾನು ಮಾತ್ರ ಮನೆಯಲ್ಲಿದ್ದಾಗ ಈ ಸಮಯದಲ್ಲಿ ಏನು ಮಾಡುತ್ತಿದ್ದೆ ಎಂಬ ಕನಸಿನಲ್ಲಿದ್ದೆ. ಆಗ ಕ್ಲಾಸ್ ಮುಗಿದ ತಕ್ಷಣ ನಮ್ಮಲಿ ಗುಸು ಗುಸು ಶುರುವಾಯಿತು. ಈ ಕಾಲೇಜ್ ಪ್ರಿಸಿಪಾಲ್ ಹೇಗಂತೆ...? ಎಂದು ಒಬ್ಬ ಕೇಳಿದರೆ ,ಮತ್ತೊಬ್ಬ ತುಂಬ ಸ್ಟ್ರಿಟ್ ಅಂತೆ... ಎಂಬಿತ್ಯಾದಿ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲಿ ತಲ್ಲಿನವಾಗಿ ಬಿಟ್ಟೆವು.ಹೌದು ಕ್ಲಾಸಿನಲ್ಲಿ ಒಬ್ಬ ಹೇಳಿದ ಹಾಗೆ ಪ್ರಿಸಿಪಾಲ್ ಸ್ಟ್ರಿಟ್ ಕ್ಲಾಸಿಗೆ ತಡವಾಗಿ ಬರುವ ಹಾಗಿಲ್ಲ ಹಾಗೆನಾದರು ಬಂದರೆ ಆತ ಲೈಬ್ರೆರಿಯಲ್ಲಿ ಕುತಿರಬೇಕು ನಂತರದ ಕ್ಲಾಸಿಗೆ ಮಾತ್ರ ಹೋಗಬೇಕು. ಒಮ್ಮೆ ಕ್ಲಾಸಿ ಒಳಗಡೆ ಹೋದರೆ ನಂತರ ಬರುತ್ತಿದ್ದದ್ದು ಕ್ಲಾಸ್ ಮುಗಿದ ಮೇಲೆ ಅಲ್ಲಿಯವರೆಗು ಬರುವ ಹಾಗಿಲ್ಲ ಕಾಲೇಜಿನ ಎಲ್ಲ ಗೇಟು ಗಳಿಗೆ ಬೇಗ ಜಡಿಯುತ್ತಿದ್ದರು ಅಲ್ಲಿ ಒಬ್ಬರನು ನೇಮಿಸಿ ಯಾರು ಹೊರಗಡೆ ಹೊಗದಂತೆ ತಡೆಯುತ್ತಿದ್ದರು.ಇದರಿಂದ ಸಂಜೆ ಕಾಲೇಜೆಂದರೆ ಅಷ್ಟಕಷ್ಟೆ ಎನ್ನುತ್ತಿದ್ದ ನಾವು ತುಂಬ ಆಶ್ಚರ್ಯ ಚಕಿತರಾದೆವು.
ಆಗ ಮತ್ತೂಬ್ಬ ಗೆಳೆಯನ ಪರಿಚಯವಾಯಿತು ಆತ ನಮ್ಮ ಏರಿಯದವನ್ನು ಎಂದು ತಿಳಿಯಿತು, ಅಲ್ಲದೆ ನಾನು ಓದಿದ ಶಾಲೆಯಲ್ಲಿ ನನಗಿಂತ ಮೊರು ವರ್ಷ ಮುಂಚೆ S.S.L.C ಮುಗಿಸಿರುವುದಾಗಿ ತಿಳಿಸಿದ ನಾನು ಸಹ ಎಲ್ಲೋ ನೋಡಿದಂತಿತ್ತು ಅವನು ಈ ವಿಷಯವನು ಹೇಳಿದ ಮೇಲೆ ಅದು ಖಚಿತವಾಯಿತು.ಮೂದಲು ಆತನನ್ನು ಹೋಗೊ ಬಾರೊ ಎನ್ನುವುದಕ್ಕೆ ಸ್ವಲ್ಪ ಅಂಜಿಕೆಯಿತ್ತು ನಂತರದ ದಿನಗಳಲ್ಲಿ ಅದು ದೊರವಾಗಿ ತುಂಬ ಸಲುಗೆಯು ಸಹ ಶುರುವಾಯಿತು.ಮೂದ ಮೂದಲು ಹೊಂದಿಕೋಳ್ಳಲು ಸ್ವಲ್ಪ ಕಷ್ಟವಾಯಿತು ನಂತರ ನಾನೆ ಹೊಂದಿಕೊಂಡು ಬಿಟ್ಟೆ ಅದು ಹೇಗಾಯಿತೆಂದರೆ ನಮ್ಮಗೆ ಅದುವೇ ಹಗಲೆನೋ ಎಂಬತೆ ಬಾಸವಾಗುತ್ತಿತ್ತು
ಕೆಲವು ಗೆಳೆಯರೆಲ್ಲ,ಎಲ್ಲರು ಸೂರ್ಯನ ಬೆಳಕಿನಲ್ಲಿ ಓದಿದರೆ ನಾನು ಕತ್ತಲ್ಲಲ್ಲಿ ಟಾರ್ಚ್ ಹಾಕಿ ಓದ ಬೇಕಲ್ಲ ಎಂದು ಗೇಲಿ ಮಾಡುತ್ತಿದ್ದರು.

ನಾನು ಸಂಜೆ ಕಾಲೇಜಿಗೆ ಸೇರಿದಾಗ ನನ್ನನ್ನು ಎಲ್ಲ ಬಯ್ಯುವವರೆ ಯಾಕ್ ಹಾಳಾಗಿ ಹೊಗುತ್ತಿಯ... ಹಗಲು ಕಾಲೇಜಿಗೆ ಸೇರುಕೊ ಸಂಜೆ ಕಾಲೇಜಿನಲ್ಲಿ ಹುಡುಗರು ಸರಿಯಿರುವುದೆಲ್ಲವಂತೆ ಎಂಬ ಭಯವನ್ನು ಸಹ ನನ್ನಲ್ಲಿ ಬಿತ್ತಿದ್ದರು. ಆದರೆ ಅಲ್ಲಿನ ವ್ಯವಸ್ಥೆಯನ್ನು ನೋಡಿದಾಗ ನಮ್ಮ ಆಯ್ಕೆ ಸರಿಯಾಗಿದೆ ಅಂತ ಅನಿಸಿತು ಕಾಲೇಜ್ ಅಂದ ತಕ್ಷಣ ಪ್ರೆಂಡ್ಸ್ ಜೋತೆ ಹರಟೆ ಹೋಡೆದು... ಲವ್ ಗಿವ್ ಅಂತ ಇರುತ್ತೆ ಅಂತ ಅಂದುಕೊಂದಿದ್ದ ನನಗೆ ಒಂದು ಹೊಸ ಅನುಭವವೇ ನೀಡಿತು.ಏಕೆಂದರೆ ಅಲ್ಲಿಗೆ ಬರುವವರೆಲ್ಲ ಕಷ್ಟ ಪಟ್ಟು ಬರುವವರು ಮತ್ತೆ ಮೊಜು ಮಸ್ತಿಗಾಗಿ ಬರುವವರಲ್ಲ.... ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇರುತ್ತಿದ್ದವರೇ ಹೆಚ್ಚು, ಮೂದಲು ಮುಜುಗರ ಪಡುತ್ತಿದ್ದ ನಾನು ನಂತರ ದೈರ್ಯವಾಗಿ ಹೇಳುತ್ತಿದ್ದೆ ನಾನು ಸಂಜೆ ಕಾಲೇಜಿನಲ್ಲಿ ಓದುತ್ತಿದ್ದೆನೆ ಎಂದು.

Tuesday, November 11, 2008

ಅಂದು ಸಂಜೆ,


ಅಂದು ಸಂಜೆ,

ಬಿಳಿಯಾದ ಮೊಡವೆಲ್ಲ ತುಂಬಿತ್ತು
ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ
ಅದು ರವಿ ಮುಳುಗುವ ಸಮಯ

ರವಿಯು ಇಂದಿನ ದಿನದ ಸೋಲುಗಳನು ಮರೆಸಿ
ನಾಳೆಯ ಹೊಸ ಕನಸುಗಳಿಗೆ ನಾಂದಿ
ಹಾಡಲು ಕಾತುರನಾಗಿದ್ದಾನೆ.
ಹಿಡಿ ಭಾನು ಮರೆಯಾಗುತ್ತಿರುವ ರವಿಯ ಕಂಡು
ಅತ್ತು ಅತ್ತು ಕೆಂಪಾಗದಂತೆ
ಹಕ್ಕಿಗಳೆಲ್ಲ ಬಾನಂಗಳದಿ ಚಿತ್ತಾರ ಮೂಡಿಸುತ್ತ
ತಮ್ಮ ಸೂರುಗಳಿಗೆ ಆತುರದಿಂದ
ಬರುತ್ತಿರುವುದನ್ನು ಕಂಡು

ಬರಿದಾದ ಮನದಲ್ಲಿ ತುಂಬಿತೊಂದು ಕನಸು
ಮನವೆಲ್ಲ ಹಿಗ್ಗಿ ನಲಿದಾಡಿದಂತ ಸೊಗಸು
ನನಗೆ ಯಾರು ಸಾಟಿಯಿಲ್ಲವೆಂತ ಹುಮ್ಮಸು
ಯಾವುದೋ ಚೈತನ್ಯವದು,ಮತ್ತೆ ಮತ್ತೆ
ಚಿಲುಮೆಯಂತೆ ಚಿಮ್ಮಿ ಎಟುಕದ ಕನಸುಗಳಿಗೆ
ಕೈ ಹಾಕುತ್ತಿತ್ತು.ಹೀಡಿ ಭುವಿಯೆ ಎತ್ತಿ ಹಿಡಿದಂತಹ ಅನುಭವ,

ಏಕೆಂದರೆ ಅದು "ಕನಸು"

Saturday, September 13, 2008

"ಅಪಶಕುನ"


ನಮ್ಮ ಜಾಗತಿಕರಣದ ಯುಗದಲ್ಲಿ ಎಷ್ಟೆ ಮುಂದುವರೆದರು ಮೊಡನಂಬಿಕೆಗಳಿಗೆ ಮಾತ್ರ ಬರವಿಲ್ಲ ಮಾನವ ಹೇಗೆ ಈ ಅಂಟು ರೋಗಕ್ಕೆ ಅಂಟಿಕೊಂಡಿರುವನೆಂದರೆ ಅದು ಮುಂಜಾನೆಯಿಂದಲೆ ಶುರು ಎಡಗಡೆ ಏಳಬಾರದು ಕೆಟ್ಟದ್ದಾಗುತ್ತದೆ.ಬೆಕ್ಕಿನ ಮುಖವನ್ನು ನೋಡಬಾರದು ಅಪಶಕುನ ಅನ್ನುತ್ತರೆ ಆದರೆ ಮನೆಯಲ್ಲಿಯೆ ಬೆಕ್ಕು ಸಾಕಿರುತ್ತಾರೆ. ಎಡಗೈಯಲ್ಲಿ ಏನು ಕೊಡಬಾರದು......ಆಗದರೆ ಬಲಗೈ ಇಲ್ಲದವರ ಗತಿ ಏನು....,,,?. ಹೀಗೆ ಹಲವು ಪ್ರಶ್ನೆಗಳು ನನ್ನನ್ನು ಇನ್ನು ಕಾಡುತ್ತಿವೆ............ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ವಶೀಕರಣ.... ಮಾಟ... ಮಂತ್ರ... ತಂತ್ರ ಅಂತ ಹಣ ಕಳೆದು ಕೊಳ್ಳುವವರೆ ಹೆಚ್ಚು. ಕೊಡೊರೆ ಹೆಚ್ಚಾದರೆ ಇನ್ನು ತಗೊಳ್ಳೊರು ಕಡಿಮೆನ ಅವರು ಸಹ ಇಂದು ಹೆಚ್ಚಾಗಿ ಹೊಗಿದ್ದಾರೆ.
ಇದಕ್ಕೆ ತದ್ವಿರುದ್ದವೆಂಬಂತೆ ನಾವು ನಮ್ಮ ಮನೆಯಲ್ಲಿ ಒಂದು ಬೆಕ್ಕನು ಸಾಕಿದ್ದೆವು ನೋಡಲು ತುಂಬ ಮುದ್ದಾದ ಮರಿ ಅದು ನಮ್ಮ ಮನೆಯ ಚಲನವಲನಗಳನ್ನು ಅತ್ಯಂತ ಸೊಕ್ಷ್ಮವಾಗಿ ಅರಿತ್ತಿತ್ತು. ಎಷ್ಟೊತ್ತಿಗೆ ಹಾಲು ಬರುತ್ತೆ ನನ್ನಗೆ ಯಾವಾಗ ಹಾಲು ಬಡಿಸುತ್ತಾರೆ ಎಂಬುದನು ಚೆನ್ನಾಗಿಯೆ ತಿಳಿದಿತ್ತು. ನನಗೆ ಬಿಡುವಿನ ವೇಳೆಯಲ್ಲಿ ಅದರ ಜೊತೆ ಆಟವಾಡುತ್ತಿದ್ದರೆ ಸಮಯದ ಪರಿವೆ ಅರಿವಾಗುತ್ತಿರಲ್ಲಿಲ್ಲ.
ಆದರೆ ನಮ್ಮ ಮನೆಯಲ್ಲಿ ಎಲ್ಲರು ಸಹ ಬೆಳಗ್ಗೆ ಎದ್ದು ಅದರ ಮುಖವನ್ನೆ ನೋಡುತ್ತಿದ್ದೆವು. ಅದರಿಂದ ನಮ್ಮಗೆ ಯಾವುದೆ ರೀತಿಯ ತೊಂದರೆಗಳು ಆಗಿರಲ್ಲಿಲ್ಲ.ಅದು ನಮ್ಮ ಮನೆಯ ಸದಸ್ಯರಲ್ಲೊಂದಾಗಿತ್ತು. ನಮ್ಮಗಿಂತ ಕಮ್ಮಿ ಏನು ಎಂಬಂತೆ ನಮ್ಮ ಮನೆಯ ನಾಯಿ(ಕರಿಯ)ಯು ಸಹ ಅದರ ಜೊತೆ ಗೊಡಿ ಆಟವಾಡುತ್ತಿದ್ದರೆ ನಮ್ಮಗೆಲ್ಲ ಸಂತೋಷ
ಆದರೆ ನೋಡಲು ತುಂಬ ಚಿಕ್ಕ ವಿಷಯದಂತೆ ಕಂಡರು ಇದರ ಹಿಂದಿರುವ ಅರ್ಥ ಮಾತ್ರ ತುಂಬ ದೊಡ್ದದು.ಈ ಪ್ರಾಣಿಗಳಿಂದ ತಿಳಿಯುವುದು ನಮ್ಮಗೆ ಇನ್ನು ಬಹಳಷ್ಟಿದೆ.
ಆ ಬೆಕ್ಕು ನಮ್ಮ ಮನೆಯಲ್ಲಿನ ಎಲ್ಲರಿಗೂ ತುಂಬ ಪ್ರಿಯವಾಗಿತ್ತು.ನಾವು ಮನೆಗೆ ಬಂದ ತಕ್ಷಣ ನಮ್ಮ ಕಾಲಿನ ಬಳಿ ಬಂದು ಒಂದು ಸುತ್ತು ಸುತ್ತಿ ಹೊಗುತ್ತಿತ್ತು,ನಾವು ಸಹ ಮನೆಗೆ ಬಂದ ತಕ್ಷಣ ಅದನು ನೋಡದೆ ಹೊದರೆ ಸಮಾದಾನವಿರುತ್ತಿರಲ್ಲಿಲ್ಲ. ಹೀಗಿರುವಾಗ ನಮ್ಮ ಮನೆಗೆ ಒಮ್ಮೆ ಊರಿನಿಂದ ಅಜ್ಜಿ ಬಂದರು ಅಂದಿನಿಂದ ಶುರುವಾಯಿತು ಅಪಶಕುನ.
ಮೂದಲು ಬೆಕ್ಕು ನನ್ನ ಪಕ್ಕದಲ್ಲಿಯೆ ಮಲಗುತ್ತಿತ್ತು ಆದರೆ ನಮ್ಮಜ್ಜಿ ಬಿಡುತ್ತಿರಲ್ಲಿಲ್ಲ ಅಪಶಕುನ ಅಂತ ಬೈಯುತಾ ಇರುತ್ತಿದ್ದಳು.
ಬೆಳಗ್ಗೆ ಅದರ ಮುಖ ನೋಡಿದರೆ ಬೈಯುತಾ ಇರುತ್ತಿದ್ದಳು.ಬರೀ ಅಪಶಕುನದ ಮಾತುಗಳನ್ನು ಆಡುತ್ತಿದ್ದಳು. ಪಾಪ ಆ ಮುಗ್ದ ಜೀವಿಗೆ ಎಲ್ಲಿ ಅರ್ಥವಾಗಬೇಕು ಇದೆಲ್ಲ ಹೀಗೆ ಬೈಯುತ್ತಿರುವಾಗ ದಿಟ್ಟಿಸಿ ನೋಡಿ
ನಾನೇನು ಮಾಡ್ಲಿಲ್ಲ ಎಂದು ತನ್ನ ಬಾಷೆಯಲ್ಲಿಯೇ ಹೇಳಿ ಸುಮ್ಮನಾಗಿಬಿಡುತ್ತಿತ್ತು. ಬೈಗುಳದಿಂದ ಅದು ರೋಸಿ ಹೊಗಿತ್ತು ಅಂತ ಕಾಣುತ್ತೆ ಒಂದು ದಿನ ಎಂದಿನಂತೆ ಹೊರಗಡೆ ಹೋದ ಬೆಕ್ಕು ಮತ್ತೆ ಮನೆಗೆ ಬರಲೆ ಇಲ್ಲ. ಇದರೆಲ್ಲದ ನಡೆವೆ ನನಗೆ ಕಾಡುತ್ತಿರುವ ಪ್ರಶ್ನೆ "ಅಪಶಕುನ" ಯಾರು.............?

Friday, September 12, 2008

ಮಳೆ ನಿಂತು ಹೋದ ಮೇಲೆ..........


ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ್ದೆ ಅಷ್ಟರಲ್ಲಿ ಹೊರಗಡೆ ಮುನ್ಸುಚನೆ ಇಲ್ಲದೆ ಮಳೆ ಬರಲು ಶುರುವಾಯಿತು.ಸ್ನೆಹಿತನಿಗೆ ಪೋನ್ ಹಚ್ಚಿದೆ ಮೂದಲ ಬಾರಿ ನಾಟ್ ರಿಚೆಬಲ್ ಅಂತ ಆ ಕಡೆಯಿಂದ ಹೆಣ್ಣಿನ ದ್ವನಿಯಲ್ಲಿ ಕೇಳಿತು.ಮತ್ತೊಮ್ಮೆ ಪ್ರಯತ್ನಿಸಿದೆ ಆಗ ಪೋನ್ ರಿಂಗ್ ಆಗ ತೊಡಗಿತು ಖುಷಿಯಿಂದ ಎಲ್ಲಿದ್ದಿಯ ಅಂತ ಕೇಳಿದೆ ನಾನು ಮನೆಯಲ್ಲೆ ಇದ್ದಿನಿ ಅಂತ ಹೇಳಿದ ನನಗೊ ಅನಿಸಿದಂತೆ ಅವನಿಗು ಸಹ ಬೋರ್ ಆಯಿತೆಂದು ಕಾಣುತ್ತದೆ ಬಾ ಹೀಗೆ ಒಂದು ರೌಂಡ್ ಹೊಗಿ ಬರೊಣವೆಂದು ಕರೆದೆ ಆಯ್ತು ಬರುತೆನೆ ಅಂದ.ಮಳೆ ಬರುತ್ತಿದ್ದರಿಂದ ನಮ್ಮ ಮನೆಯಿಂದ ೫ ಕೀ.ಮಿ ದೂರದಲ್ಲಿರುವ
ಕೆರೆಯ ಹತ್ತಿರ ಹೋಗೊಣವೆಂದು ಹೊರಟೆವು.ನಮ್ಮಗೆ ಬಿಡುವಿನ ವೇಳೆಯಲ್ಲಿ ಅತ್ಯಂತ ಪ್ರೀಯವಾದ ಸ್ಥಳವು ಅದಾಗಿತ್ತು. ಅಂದು ಮಳೆಯಲ್ಲಿ ಹತ್ತಿರದಿಂದ ಕೆರೆಯ ಸೌಂದರ್ಯವನ್ನು ಸವೆಯುವ ಆಸೆ ನಮ್ಮದಾಗಿತ್ತು. ಆದರೆ ಮಳೆಯ ಅರ್ಭಟ ಮಾತ್ರ ಇನ್ನು ಹೆಚ್ಚಾಗ ತೊಡಗಿತು.ಮುಗಿಲಿನ ಸಂಗೀತಕ್ಕೆ ಮಳೆಯು ಚಿಟ.....ಪಟ.....ಚಿಟ...ಪಟ........ಅಂತ ಸಾಹಿತ್ಯ ಹಾಡುತ್ತಿತು
ಮುಗಿಲು ಮತ್ತಷ್ಟು ಗೊಗರಯಲು ತಾನೆನು ಕಮ್ಮಿ ಎಂಬಂತೆ ಮಳೆಯು ಸಹ ಅಂದು ರುದ್ರ ನರ್ತನವನ್ನೆ ಹಾಡಿತು.ಹಾದಿಯಲ್ಲಿ ನಮ್ಮ ಏರಿಯಾದ ಹಿರಿಯರೆಲ್ಲ ಚಳಿಗೆ ಮಳೆಗೆ ಹಿಡಿ ಶಾಪ ಹಾಕುತ್ತ ಗೊಡು ಸೇರುತ್ತಿದ್ದರೆ ಮಕ್ಕಳು ಮಾತ್ರ ಶಾಲೆ ಬಿಟ್ಟರು ಮನೆ ತೆರಳುವ ಮನಸ್ಸಿಲ್ಲದೆ ಪ್ರಪಂಚದ ಪರಿಯಿಲ್ಲದೆ ಮಳೆಯಲ್ಲಿ ಹಾಡುತ್ತಿದ್ದವು. ನಾವು ಕಾತುರದಿಂದ ಕೆರೆಯ ಸೊಬಗನು ನೊಡುವ ಆತುರದಲ್ಲಿ ಬೇಗ ಅತ್ತ ದಾವಿಸೆದೆವು. ಮಳೆಯು ಮತ್ತು ಕೆರೆಯು ಸ್ನೆಹಿತರೆಂಬಂತೆ ಹನಿಗಳಲ್ಲಿ ಚಿಟ..........ಪಟ.......... ಮಾತು ನಡೆಯುತ್ತಿತ್ತು. ಬಹಳ ಅತ್ಮಿಯವೆಂಬಂತೆ ಆ ಕೆರೆಯು ಮೈ ಚಾಚಿ ಮಳೆಯನ್ನು ತಬ್ಬಿಕೊಂಡತೆ ಕಾಣುತ್ತಿತು ಆ ದೃಶ್ಯ. ಆ ಕೆರೆಯ ಸೊಬಗನು ಇಂದು ಕಂಡತೆ ಹಿಂದೆದು ಕಂಡಿರಲ್ಲಿಲ್ಲ. ಆ ದೃಶ್ಯವನ್ನು ಹಾಗೆ ಕಣ್ ತುಂಬಿ ಕೊಳ್ಳುತ್ತ ಅಲ್ಲೆ ಒಂದು ಚಾವಣಿಯ ಕಳಗೆ ನಿಂತೆವು.... ಆಗಸದಲ್ಲಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿ ದಾವಿಸುತ್ತಿದ್ದವು. ಹಾಗೆ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಯಿತು.ಅದುವರೆಗು ಜಡ ಹಿಡಿದ ಕೆಲಸಗಳಿಗೆಲ್ಲ ಮತ್ತೆ ಚಾಲನೆ ಸಿಕ್ಕಿತು ರಸ್ತೆಯಲ್ಲಿ ಮತ್ತೆ ವಾಹನಗಳ ಸದ್ದು ಕೇಳಿಬರುತ್ತಿತ್ತು. ಅದುವರೆಗು ಮಳೆಯಲ್ಲಿ ಆಟ ಹಾಡಿದ ಮಕ್ಕಳು ಮಳೆಯ ಮೇಲೆ ಮುನಿಸಿಕೊಂಡು ಮತ್ತೆ ಮನೆಗಳ್ಳತ್ತ ದೌಡಾಯಿಸಿದರು.
ನಾನು ಮತ್ತು ನನ್ನ ಸ್ನೆಹಿತ ಅಲ್ಲೆ ಸ್ವಲ್ಪ ಹೊತ್ತು ಬೇರೆ ವಿಷಯಗಳ ಬಗ್ಗೆ ಮಾತಾಡ ತೊಡಗಿದೆವು. ಹತ್ತಿರದೆಲ್ಲೆ ಇದ್ದ ಒಂದು ಮರದೆಲ್ಲಿ ಕೂ...ಕೂ....ಕೂ............ಎಂದು ಕೊಗಿಲೆಯು ತನ್ನ ಸವಿಯಾದ ಕಂಠದಲ್ಲಿ ನಮ್ಮಗೆ ಸಂಗೀತ ಉಣಬಡಿಸಿತು.ಆಗ ಮಳೆಯು ಸಂಪೂರ್ಣವಾಗಿ ನಿಂತಿತ್ತು. ಆದರು ಮರವು ಮೈಕೊಡವಿದಂತೆ ಎಲೆಗಳಿಂದ ಹನಿ ತೊಟ್ಟಿಕ್ಕುತ್ತಿದ್ದವು. ಹಾಗೆಯೇ ಆ ಕೊಗಿಲೆಯು ಬೀಳುತ್ತಿದ್ದ ಹನಿಗಳಿಗೆ ಸಾಹಿತ್ಯ ಹೊಂದಿಸುತ್ತಿತ್ತು. ತಕ್ಷಣ ಆ ಕೊಗಿಲೆಯು ಪಕ್ಕದಲ್ಲಿದ ವಿದ್ಯುತ್ ಕಂಬದ ಮೇಲೆ ಹಾರಿತು ನೋಡು ನೋಡುತ್ತಿದ್ದಂತೆ ಶಾರ್ಟ್ ಸರ್ಕಿಟ್ ಆಗಿ ಸ್ಥಳದಲ್ಲಿಯೆ ಅಸುನೀಗಿತು.....
ಇಷ್ಟು ಹೊತ್ತು ಆ ಸ್ಥಳವನ್ನು ಸಂಗೀತಮಯದಿಂದ ತುಂಬಿಸಿದ ಒಂದು ಜೀವ ಕಣ್ಮುಂದೆಯೆ ಅದರ ಹಾಡು ಅಂತ್ಯವಾಯಿತು. ನೀರವ ಮೌನ ಅವರಿಸಿತು
ಆದರೆ ಆ ಜೀವ ಹಾಡುತ್ತಿದ್ದಾಗ ಎಷ್ಟು ಜನರ ಕಿವಿಗೆ ಮುದತಂದಿತೊ ಗೊತ್ತಿಲ್ಲ ಆದರೆ ಸತ್ತಿದ್ದಕ್ಕೆ ಯಾರು ಕಣ್ಣಿರಿಡುತ್ತರೊ ಗೊತ್ತಿಲ್ಲ ಆ ಕೆರೆಯ ಬಳಿಯಲ್ಲಿದ್ದ ಮರಗಳಿಂದ ಹನಿಗಳು ಮಾತ್ರ ಜೀನುಗುತ್ತಿತ್ತು......ಅದು ನಮ್ಮಗೆ ಹಾಗ ಕಂಡದ್ದು ಕಣ್ಣೀರಿನಂತೆ..ಆ ಕೆರೆಯು ಸಹ ಕಣ್ಣೀರಿಟ್ಟು ತುಂಬಿಸಿ ಕೊಂಡಂತೆ ಬಾಸವಾಗುತ್ತಿತ್ತು. ಆಗ ಮುಗಿಲು ಸಹ ಮತ್ತೆ ಅಳಲು ಶುರುಮಾಡಿತು. ಹೀಡಿ ಆ ಪ್ರಕೃತಿಯೆ ಆ ಜೀವಕ್ಕೆ ಶ್ರದ್ದಾಂಜಲಿ ಸಲ್ಲಿಸಿದಂತೆ ಬಾಸವಾಗುತ್ತಿತ್ತು. ಕ್ಷಣ ಮಾತ್ರದಲ್ಲಿ ಕತ್ತಲು ಆವರಿಸತೊಡಗಿತು.....