Tuesday, November 11, 2008

ಅಂದು ಸಂಜೆ,


ಅಂದು ಸಂಜೆ,

ಬಿಳಿಯಾದ ಮೊಡವೆಲ್ಲ ತುಂಬಿತ್ತು
ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ
ಅದು ರವಿ ಮುಳುಗುವ ಸಮಯ

ರವಿಯು ಇಂದಿನ ದಿನದ ಸೋಲುಗಳನು ಮರೆಸಿ
ನಾಳೆಯ ಹೊಸ ಕನಸುಗಳಿಗೆ ನಾಂದಿ
ಹಾಡಲು ಕಾತುರನಾಗಿದ್ದಾನೆ.
ಹಿಡಿ ಭಾನು ಮರೆಯಾಗುತ್ತಿರುವ ರವಿಯ ಕಂಡು
ಅತ್ತು ಅತ್ತು ಕೆಂಪಾಗದಂತೆ
ಹಕ್ಕಿಗಳೆಲ್ಲ ಬಾನಂಗಳದಿ ಚಿತ್ತಾರ ಮೂಡಿಸುತ್ತ
ತಮ್ಮ ಸೂರುಗಳಿಗೆ ಆತುರದಿಂದ
ಬರುತ್ತಿರುವುದನ್ನು ಕಂಡು

ಬರಿದಾದ ಮನದಲ್ಲಿ ತುಂಬಿತೊಂದು ಕನಸು
ಮನವೆಲ್ಲ ಹಿಗ್ಗಿ ನಲಿದಾಡಿದಂತ ಸೊಗಸು
ನನಗೆ ಯಾರು ಸಾಟಿಯಿಲ್ಲವೆಂತ ಹುಮ್ಮಸು
ಯಾವುದೋ ಚೈತನ್ಯವದು,ಮತ್ತೆ ಮತ್ತೆ
ಚಿಲುಮೆಯಂತೆ ಚಿಮ್ಮಿ ಎಟುಕದ ಕನಸುಗಳಿಗೆ
ಕೈ ಹಾಕುತ್ತಿತ್ತು.ಹೀಡಿ ಭುವಿಯೆ ಎತ್ತಿ ಹಿಡಿದಂತಹ ಅನುಭವ,

ಏಕೆಂದರೆ ಅದು "ಕನಸು"

Saturday, September 13, 2008

"ಅಪಶಕುನ"


ನಮ್ಮ ಜಾಗತಿಕರಣದ ಯುಗದಲ್ಲಿ ಎಷ್ಟೆ ಮುಂದುವರೆದರು ಮೊಡನಂಬಿಕೆಗಳಿಗೆ ಮಾತ್ರ ಬರವಿಲ್ಲ ಮಾನವ ಹೇಗೆ ಈ ಅಂಟು ರೋಗಕ್ಕೆ ಅಂಟಿಕೊಂಡಿರುವನೆಂದರೆ ಅದು ಮುಂಜಾನೆಯಿಂದಲೆ ಶುರು ಎಡಗಡೆ ಏಳಬಾರದು ಕೆಟ್ಟದ್ದಾಗುತ್ತದೆ.ಬೆಕ್ಕಿನ ಮುಖವನ್ನು ನೋಡಬಾರದು ಅಪಶಕುನ ಅನ್ನುತ್ತರೆ ಆದರೆ ಮನೆಯಲ್ಲಿಯೆ ಬೆಕ್ಕು ಸಾಕಿರುತ್ತಾರೆ. ಎಡಗೈಯಲ್ಲಿ ಏನು ಕೊಡಬಾರದು......ಆಗದರೆ ಬಲಗೈ ಇಲ್ಲದವರ ಗತಿ ಏನು....,,,?. ಹೀಗೆ ಹಲವು ಪ್ರಶ್ನೆಗಳು ನನ್ನನ್ನು ಇನ್ನು ಕಾಡುತ್ತಿವೆ............ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ವಶೀಕರಣ.... ಮಾಟ... ಮಂತ್ರ... ತಂತ್ರ ಅಂತ ಹಣ ಕಳೆದು ಕೊಳ್ಳುವವರೆ ಹೆಚ್ಚು. ಕೊಡೊರೆ ಹೆಚ್ಚಾದರೆ ಇನ್ನು ತಗೊಳ್ಳೊರು ಕಡಿಮೆನ ಅವರು ಸಹ ಇಂದು ಹೆಚ್ಚಾಗಿ ಹೊಗಿದ್ದಾರೆ.
ಇದಕ್ಕೆ ತದ್ವಿರುದ್ದವೆಂಬಂತೆ ನಾವು ನಮ್ಮ ಮನೆಯಲ್ಲಿ ಒಂದು ಬೆಕ್ಕನು ಸಾಕಿದ್ದೆವು ನೋಡಲು ತುಂಬ ಮುದ್ದಾದ ಮರಿ ಅದು ನಮ್ಮ ಮನೆಯ ಚಲನವಲನಗಳನ್ನು ಅತ್ಯಂತ ಸೊಕ್ಷ್ಮವಾಗಿ ಅರಿತ್ತಿತ್ತು. ಎಷ್ಟೊತ್ತಿಗೆ ಹಾಲು ಬರುತ್ತೆ ನನ್ನಗೆ ಯಾವಾಗ ಹಾಲು ಬಡಿಸುತ್ತಾರೆ ಎಂಬುದನು ಚೆನ್ನಾಗಿಯೆ ತಿಳಿದಿತ್ತು. ನನಗೆ ಬಿಡುವಿನ ವೇಳೆಯಲ್ಲಿ ಅದರ ಜೊತೆ ಆಟವಾಡುತ್ತಿದ್ದರೆ ಸಮಯದ ಪರಿವೆ ಅರಿವಾಗುತ್ತಿರಲ್ಲಿಲ್ಲ.
ಆದರೆ ನಮ್ಮ ಮನೆಯಲ್ಲಿ ಎಲ್ಲರು ಸಹ ಬೆಳಗ್ಗೆ ಎದ್ದು ಅದರ ಮುಖವನ್ನೆ ನೋಡುತ್ತಿದ್ದೆವು. ಅದರಿಂದ ನಮ್ಮಗೆ ಯಾವುದೆ ರೀತಿಯ ತೊಂದರೆಗಳು ಆಗಿರಲ್ಲಿಲ್ಲ.ಅದು ನಮ್ಮ ಮನೆಯ ಸದಸ್ಯರಲ್ಲೊಂದಾಗಿತ್ತು. ನಮ್ಮಗಿಂತ ಕಮ್ಮಿ ಏನು ಎಂಬಂತೆ ನಮ್ಮ ಮನೆಯ ನಾಯಿ(ಕರಿಯ)ಯು ಸಹ ಅದರ ಜೊತೆ ಗೊಡಿ ಆಟವಾಡುತ್ತಿದ್ದರೆ ನಮ್ಮಗೆಲ್ಲ ಸಂತೋಷ
ಆದರೆ ನೋಡಲು ತುಂಬ ಚಿಕ್ಕ ವಿಷಯದಂತೆ ಕಂಡರು ಇದರ ಹಿಂದಿರುವ ಅರ್ಥ ಮಾತ್ರ ತುಂಬ ದೊಡ್ದದು.ಈ ಪ್ರಾಣಿಗಳಿಂದ ತಿಳಿಯುವುದು ನಮ್ಮಗೆ ಇನ್ನು ಬಹಳಷ್ಟಿದೆ.
ಆ ಬೆಕ್ಕು ನಮ್ಮ ಮನೆಯಲ್ಲಿನ ಎಲ್ಲರಿಗೂ ತುಂಬ ಪ್ರಿಯವಾಗಿತ್ತು.ನಾವು ಮನೆಗೆ ಬಂದ ತಕ್ಷಣ ನಮ್ಮ ಕಾಲಿನ ಬಳಿ ಬಂದು ಒಂದು ಸುತ್ತು ಸುತ್ತಿ ಹೊಗುತ್ತಿತ್ತು,ನಾವು ಸಹ ಮನೆಗೆ ಬಂದ ತಕ್ಷಣ ಅದನು ನೋಡದೆ ಹೊದರೆ ಸಮಾದಾನವಿರುತ್ತಿರಲ್ಲಿಲ್ಲ. ಹೀಗಿರುವಾಗ ನಮ್ಮ ಮನೆಗೆ ಒಮ್ಮೆ ಊರಿನಿಂದ ಅಜ್ಜಿ ಬಂದರು ಅಂದಿನಿಂದ ಶುರುವಾಯಿತು ಅಪಶಕುನ.
ಮೂದಲು ಬೆಕ್ಕು ನನ್ನ ಪಕ್ಕದಲ್ಲಿಯೆ ಮಲಗುತ್ತಿತ್ತು ಆದರೆ ನಮ್ಮಜ್ಜಿ ಬಿಡುತ್ತಿರಲ್ಲಿಲ್ಲ ಅಪಶಕುನ ಅಂತ ಬೈಯುತಾ ಇರುತ್ತಿದ್ದಳು.
ಬೆಳಗ್ಗೆ ಅದರ ಮುಖ ನೋಡಿದರೆ ಬೈಯುತಾ ಇರುತ್ತಿದ್ದಳು.ಬರೀ ಅಪಶಕುನದ ಮಾತುಗಳನ್ನು ಆಡುತ್ತಿದ್ದಳು. ಪಾಪ ಆ ಮುಗ್ದ ಜೀವಿಗೆ ಎಲ್ಲಿ ಅರ್ಥವಾಗಬೇಕು ಇದೆಲ್ಲ ಹೀಗೆ ಬೈಯುತ್ತಿರುವಾಗ ದಿಟ್ಟಿಸಿ ನೋಡಿ
ನಾನೇನು ಮಾಡ್ಲಿಲ್ಲ ಎಂದು ತನ್ನ ಬಾಷೆಯಲ್ಲಿಯೇ ಹೇಳಿ ಸುಮ್ಮನಾಗಿಬಿಡುತ್ತಿತ್ತು. ಬೈಗುಳದಿಂದ ಅದು ರೋಸಿ ಹೊಗಿತ್ತು ಅಂತ ಕಾಣುತ್ತೆ ಒಂದು ದಿನ ಎಂದಿನಂತೆ ಹೊರಗಡೆ ಹೋದ ಬೆಕ್ಕು ಮತ್ತೆ ಮನೆಗೆ ಬರಲೆ ಇಲ್ಲ. ಇದರೆಲ್ಲದ ನಡೆವೆ ನನಗೆ ಕಾಡುತ್ತಿರುವ ಪ್ರಶ್ನೆ "ಅಪಶಕುನ" ಯಾರು.............?

Friday, September 12, 2008

ಮಳೆ ನಿಂತು ಹೋದ ಮೇಲೆ..........


ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ್ದೆ ಅಷ್ಟರಲ್ಲಿ ಹೊರಗಡೆ ಮುನ್ಸುಚನೆ ಇಲ್ಲದೆ ಮಳೆ ಬರಲು ಶುರುವಾಯಿತು.ಸ್ನೆಹಿತನಿಗೆ ಪೋನ್ ಹಚ್ಚಿದೆ ಮೂದಲ ಬಾರಿ ನಾಟ್ ರಿಚೆಬಲ್ ಅಂತ ಆ ಕಡೆಯಿಂದ ಹೆಣ್ಣಿನ ದ್ವನಿಯಲ್ಲಿ ಕೇಳಿತು.ಮತ್ತೊಮ್ಮೆ ಪ್ರಯತ್ನಿಸಿದೆ ಆಗ ಪೋನ್ ರಿಂಗ್ ಆಗ ತೊಡಗಿತು ಖುಷಿಯಿಂದ ಎಲ್ಲಿದ್ದಿಯ ಅಂತ ಕೇಳಿದೆ ನಾನು ಮನೆಯಲ್ಲೆ ಇದ್ದಿನಿ ಅಂತ ಹೇಳಿದ ನನಗೊ ಅನಿಸಿದಂತೆ ಅವನಿಗು ಸಹ ಬೋರ್ ಆಯಿತೆಂದು ಕಾಣುತ್ತದೆ ಬಾ ಹೀಗೆ ಒಂದು ರೌಂಡ್ ಹೊಗಿ ಬರೊಣವೆಂದು ಕರೆದೆ ಆಯ್ತು ಬರುತೆನೆ ಅಂದ.ಮಳೆ ಬರುತ್ತಿದ್ದರಿಂದ ನಮ್ಮ ಮನೆಯಿಂದ ೫ ಕೀ.ಮಿ ದೂರದಲ್ಲಿರುವ
ಕೆರೆಯ ಹತ್ತಿರ ಹೋಗೊಣವೆಂದು ಹೊರಟೆವು.ನಮ್ಮಗೆ ಬಿಡುವಿನ ವೇಳೆಯಲ್ಲಿ ಅತ್ಯಂತ ಪ್ರೀಯವಾದ ಸ್ಥಳವು ಅದಾಗಿತ್ತು. ಅಂದು ಮಳೆಯಲ್ಲಿ ಹತ್ತಿರದಿಂದ ಕೆರೆಯ ಸೌಂದರ್ಯವನ್ನು ಸವೆಯುವ ಆಸೆ ನಮ್ಮದಾಗಿತ್ತು. ಆದರೆ ಮಳೆಯ ಅರ್ಭಟ ಮಾತ್ರ ಇನ್ನು ಹೆಚ್ಚಾಗ ತೊಡಗಿತು.ಮುಗಿಲಿನ ಸಂಗೀತಕ್ಕೆ ಮಳೆಯು ಚಿಟ.....ಪಟ.....ಚಿಟ...ಪಟ........ಅಂತ ಸಾಹಿತ್ಯ ಹಾಡುತ್ತಿತು
ಮುಗಿಲು ಮತ್ತಷ್ಟು ಗೊಗರಯಲು ತಾನೆನು ಕಮ್ಮಿ ಎಂಬಂತೆ ಮಳೆಯು ಸಹ ಅಂದು ರುದ್ರ ನರ್ತನವನ್ನೆ ಹಾಡಿತು.ಹಾದಿಯಲ್ಲಿ ನಮ್ಮ ಏರಿಯಾದ ಹಿರಿಯರೆಲ್ಲ ಚಳಿಗೆ ಮಳೆಗೆ ಹಿಡಿ ಶಾಪ ಹಾಕುತ್ತ ಗೊಡು ಸೇರುತ್ತಿದ್ದರೆ ಮಕ್ಕಳು ಮಾತ್ರ ಶಾಲೆ ಬಿಟ್ಟರು ಮನೆ ತೆರಳುವ ಮನಸ್ಸಿಲ್ಲದೆ ಪ್ರಪಂಚದ ಪರಿಯಿಲ್ಲದೆ ಮಳೆಯಲ್ಲಿ ಹಾಡುತ್ತಿದ್ದವು. ನಾವು ಕಾತುರದಿಂದ ಕೆರೆಯ ಸೊಬಗನು ನೊಡುವ ಆತುರದಲ್ಲಿ ಬೇಗ ಅತ್ತ ದಾವಿಸೆದೆವು. ಮಳೆಯು ಮತ್ತು ಕೆರೆಯು ಸ್ನೆಹಿತರೆಂಬಂತೆ ಹನಿಗಳಲ್ಲಿ ಚಿಟ..........ಪಟ.......... ಮಾತು ನಡೆಯುತ್ತಿತ್ತು. ಬಹಳ ಅತ್ಮಿಯವೆಂಬಂತೆ ಆ ಕೆರೆಯು ಮೈ ಚಾಚಿ ಮಳೆಯನ್ನು ತಬ್ಬಿಕೊಂಡತೆ ಕಾಣುತ್ತಿತು ಆ ದೃಶ್ಯ. ಆ ಕೆರೆಯ ಸೊಬಗನು ಇಂದು ಕಂಡತೆ ಹಿಂದೆದು ಕಂಡಿರಲ್ಲಿಲ್ಲ. ಆ ದೃಶ್ಯವನ್ನು ಹಾಗೆ ಕಣ್ ತುಂಬಿ ಕೊಳ್ಳುತ್ತ ಅಲ್ಲೆ ಒಂದು ಚಾವಣಿಯ ಕಳಗೆ ನಿಂತೆವು.... ಆಗಸದಲ್ಲಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿ ದಾವಿಸುತ್ತಿದ್ದವು. ಹಾಗೆ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಯಿತು.ಅದುವರೆಗು ಜಡ ಹಿಡಿದ ಕೆಲಸಗಳಿಗೆಲ್ಲ ಮತ್ತೆ ಚಾಲನೆ ಸಿಕ್ಕಿತು ರಸ್ತೆಯಲ್ಲಿ ಮತ್ತೆ ವಾಹನಗಳ ಸದ್ದು ಕೇಳಿಬರುತ್ತಿತ್ತು. ಅದುವರೆಗು ಮಳೆಯಲ್ಲಿ ಆಟ ಹಾಡಿದ ಮಕ್ಕಳು ಮಳೆಯ ಮೇಲೆ ಮುನಿಸಿಕೊಂಡು ಮತ್ತೆ ಮನೆಗಳ್ಳತ್ತ ದೌಡಾಯಿಸಿದರು.
ನಾನು ಮತ್ತು ನನ್ನ ಸ್ನೆಹಿತ ಅಲ್ಲೆ ಸ್ವಲ್ಪ ಹೊತ್ತು ಬೇರೆ ವಿಷಯಗಳ ಬಗ್ಗೆ ಮಾತಾಡ ತೊಡಗಿದೆವು. ಹತ್ತಿರದೆಲ್ಲೆ ಇದ್ದ ಒಂದು ಮರದೆಲ್ಲಿ ಕೂ...ಕೂ....ಕೂ............ಎಂದು ಕೊಗಿಲೆಯು ತನ್ನ ಸವಿಯಾದ ಕಂಠದಲ್ಲಿ ನಮ್ಮಗೆ ಸಂಗೀತ ಉಣಬಡಿಸಿತು.ಆಗ ಮಳೆಯು ಸಂಪೂರ್ಣವಾಗಿ ನಿಂತಿತ್ತು. ಆದರು ಮರವು ಮೈಕೊಡವಿದಂತೆ ಎಲೆಗಳಿಂದ ಹನಿ ತೊಟ್ಟಿಕ್ಕುತ್ತಿದ್ದವು. ಹಾಗೆಯೇ ಆ ಕೊಗಿಲೆಯು ಬೀಳುತ್ತಿದ್ದ ಹನಿಗಳಿಗೆ ಸಾಹಿತ್ಯ ಹೊಂದಿಸುತ್ತಿತ್ತು. ತಕ್ಷಣ ಆ ಕೊಗಿಲೆಯು ಪಕ್ಕದಲ್ಲಿದ ವಿದ್ಯುತ್ ಕಂಬದ ಮೇಲೆ ಹಾರಿತು ನೋಡು ನೋಡುತ್ತಿದ್ದಂತೆ ಶಾರ್ಟ್ ಸರ್ಕಿಟ್ ಆಗಿ ಸ್ಥಳದಲ್ಲಿಯೆ ಅಸುನೀಗಿತು.....
ಇಷ್ಟು ಹೊತ್ತು ಆ ಸ್ಥಳವನ್ನು ಸಂಗೀತಮಯದಿಂದ ತುಂಬಿಸಿದ ಒಂದು ಜೀವ ಕಣ್ಮುಂದೆಯೆ ಅದರ ಹಾಡು ಅಂತ್ಯವಾಯಿತು. ನೀರವ ಮೌನ ಅವರಿಸಿತು
ಆದರೆ ಆ ಜೀವ ಹಾಡುತ್ತಿದ್ದಾಗ ಎಷ್ಟು ಜನರ ಕಿವಿಗೆ ಮುದತಂದಿತೊ ಗೊತ್ತಿಲ್ಲ ಆದರೆ ಸತ್ತಿದ್ದಕ್ಕೆ ಯಾರು ಕಣ್ಣಿರಿಡುತ್ತರೊ ಗೊತ್ತಿಲ್ಲ ಆ ಕೆರೆಯ ಬಳಿಯಲ್ಲಿದ್ದ ಮರಗಳಿಂದ ಹನಿಗಳು ಮಾತ್ರ ಜೀನುಗುತ್ತಿತ್ತು......ಅದು ನಮ್ಮಗೆ ಹಾಗ ಕಂಡದ್ದು ಕಣ್ಣೀರಿನಂತೆ..ಆ ಕೆರೆಯು ಸಹ ಕಣ್ಣೀರಿಟ್ಟು ತುಂಬಿಸಿ ಕೊಂಡಂತೆ ಬಾಸವಾಗುತ್ತಿತ್ತು. ಆಗ ಮುಗಿಲು ಸಹ ಮತ್ತೆ ಅಳಲು ಶುರುಮಾಡಿತು. ಹೀಡಿ ಆ ಪ್ರಕೃತಿಯೆ ಆ ಜೀವಕ್ಕೆ ಶ್ರದ್ದಾಂಜಲಿ ಸಲ್ಲಿಸಿದಂತೆ ಬಾಸವಾಗುತ್ತಿತ್ತು. ಕ್ಷಣ ಮಾತ್ರದಲ್ಲಿ ಕತ್ತಲು ಆವರಿಸತೊಡಗಿತು.....